ನಮಸ್ಕಾರ ಸ್ನೇಹಿತರೆ, ರಾಜ್ಯ ಸರ್ಕಾರದಿಂದ ಕಳೆದಾರರಿಂದ ಏಳು ತಿಂಗಳ ಅವಧಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ 10,000ಗಳನ್ನು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಜಮ ಮಾಡಲಾಗಿದೆ. ಇದೀಗ ವರಲಕ್ಷ್ಮಿ ಯೋಜನೆಯ ಐದನೇ ಕಂತಿನ ಹಡಗು ಕೂಡ ಬಿಡುಗಡೆಯಾಗಿದ್ದು ಈ ಎರಡು ಸಾವಿರ ರೂಪಾಯಿಗಳು ಮಹಿಳೆಯರ ತಿಂಗಳ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಲು ಬಹಳ ಪ್ರಯೋಜನಕಾರಿಯಾಗಿದೆ ಎಂದು ಹೇಳಬಹುದು. ಸುಮಾರು 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿದ್ದು ಈಗಾಗಲೇ 90% ಮಹಿಳೆಯರಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ ಇದೀಗ ಹೊಸ ಅಪ್ಡೇಟ್ ಅನ್ನು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ನೀಡಿದೆ.
ಹಲವರ ರೇಷನ್ ಕಾರ್ಡ್ ರದ್ದಾಗಿದೆ :
ಸರ್ಕಾರದ ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಪಡೆದು ಸಾಕಷ್ಟು ಜನರ ಬಿಪಿಎಲ್ ಕಾರ್ಡ್ ಅನ್ನು ರದ್ದುಪಡಿಸಿದ್ದು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗಬೇಕಾದರೆ ರೇಷನ್ ಕಾರ್ಡ್ ಮನೆ ಯಜಮಾನ ಹೆಸರಿನಲ್ಲಿ ಇರಬೇಕು ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಮಾತ್ರ ಯೋಜನೆಯ ಹಣ ಜಮಾ ಆಗುತ್ತದೆ.
ಬ್ಯಾಂಕ್ ಖಾತೆಗೆ ಸಾಕಷ್ಟು ಮಹಿಳೆಯರು ಈ ಆಧಾರ್ ಲಿಂಕ್ ಮಾಡಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಇದುವರೆಗೂ ಕೂಡ ಅಂಥವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಇದನ್ನು ಹೊರತುಪಡಿಸಿ ಸರ್ಕಾರದ ಮಾನದಂಡಗಳನ್ನು ನಿರ್ಲಕ್ಷಿಸಿ, ಬಿಪಿಎಲ್ ಕಾರ್ಡ್ ಅನ್ನು ಬಳಸುತ್ತಿರುವವರ ರೇಷನ್ ಕಾರ್ಡ್ ರದ್ದುಪಡಿಸಲು ಸರ್ಕಾರ ನಿರ್ಧರಿಸಿದ್ದು ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಸರ್ಕಾರ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಆದ https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ನೀಡಿ ರೇಷನ್ ಕಾರ್ಡ್ ರದ್ದಾಗಿರುವ ವಿವರವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಸರ್ಕಾರದಿಂದ ಬರ ಪರಿಹಾರದ ಹಣ ಜಮಾ ಆಗಿದೆಯಾ : ಬಂದಿಲ್ಲಾ ಅಂದರೆ ಹೀಗೆ ಮಾಡಿ
2000 ಹಣದ ಬದಲು 4000 ಹಣವನ್ನು ಸರ್ಕಾರ ನೀಡುತ್ತದೆ :
ಪ್ರತಿ ತಿಂಗಳು ಸರ್ಕಾರದಿಂದ ಸಿಗುತ್ತಿರುವಂತಹ 2000ಗಳನ್ನು ಗೃಹಣಿಯರು ಪಡೆದುಕೊಂಡು ತಮ್ಮ ಮನೆಯ ಖರ್ಚು ನಿಭಾಯಿಸುವುದರ ಜೊತೆಗೆ ಕೆಲವೊಂದು ವ್ಯವಹಾರಗಳನ್ನು ಕೂಡ ಆರಂಭಿಸಿದ್ದಾರೆ ಅಂದರೆ ಖಾಸಗಿ ಚೀಟಿ ವ್ಯವಹಾರದಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ.
ಚಿಟ್ ಫಂಡ್ ನಲ್ಲಿ ಎರಡು ಸಾವಿರ ರೂಪಾಯಿ ಹೂಡಿಕೆ :
ಈಗಾಗಲೇ ಚಿಟ್ ಫಂಡ್ ಯೋಜನೆಯನ್ನು ಕೇರಳ ರಾಜ್ಯದಲ್ಲಿ ಯಶಸ್ವಿಗೊಳಿಸಿದ್ದು ಕರ್ನಾಟಕದಲ್ಲಿಯೂ ಕೂಡ ರಾಜ್ಯ ಸರ್ಕಾರವು ಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಪ್ರತಿ ತಿಂಗಳು 2000ಗಳನ್ನು ಮಹಿಳೆಯರು ಸರ್ಕಾರಕ್ಕೆ ಹೂಡಿಕೆ ಮಾಡಲು ಕೊಟ್ಟರೆ ಕೆಲವು ತಿಂಗಳ ಅವಧಿಯ ನಂತರ ಆ ಹಣಕ್ಕೆ ಬಡ್ಡಿ ಸೇರಿಸಿ ಆ ಹಣವನ್ನು ಸರ್ಕಾರ ಹಿಂದಿರುಗಿಸುತ್ತದೆ. 20 30 40 ತಿಂಗಳ ಅವಧಿಗೆ ಈ ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದಾಗಿದ್ದು ಹೂಡಿಕೆ ಮಾಡಿದಂತಹ ಹಣಕ್ಕೆ ಅವಧಿ ಮುಗಿದ ನಂತರ ಬಡ್ಡಿ ಸಮೇತ ಹಣವನ್ನು ಪಡೆಯಬಹುದಾಗಿದೆ.
ಹೀಗೆ ಚಿಟ್ ಫಂಡ್ ಯೋಜನೆಯನ್ನು ಕೇರಳ ಸರ್ಕಾರವು ಜಾರಿಗೆ ತಂದಿದ್ದು ಇದೀಗ ಕರ್ನಾಟಕದಲ್ಲಿಯೂ ಕೂಡ ಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಮಾಹಿತಿಯನ್ನು ಎಲ್ಲ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಈ ಯೋಜನೆಯಿಂದ 2,000 ಬದಲು 4000 ಹಣವನ್ನು ಪಡೆಯಬಹುದು ಎಂಬುದನ್ನು ತಿಳಿಸಿ ಧನ್ಯವಾದಗಳು.